Showing posts with label Koratageri. Show all posts
Showing posts with label Koratageri. Show all posts

Tuesday, 7 May 2013

ಹೀಗೊಂದು Weekend ಮಸ್ತಿ - ಶಿವಗಂಗೆ/ಶಿವಗಂಗಾ ( Trek to Shivagange/shivaganga - 5th May 2013)





ಶಿವಗಂಗೆ

ಶಿವಗಂಗೆ (ಶಿವಗಂಗಾ):-

ಶಿವಗಂಗೆ ಇರೋದು ಬೆಂಗಳೂರಿಂದ ತುಮಕೂರು ಮಾರ್ಗದಲ್ಲಿ ಸುಮಾರು 60 ಕಿ.ಮೀ.ದೂರದಲ್ಲಿ
ಇದೊಂದು ಧಾರ್ಮಿಕ ಮತ್ತು ಪ್ರವಾಸಿ ತಾಣ.  ಧಾರ್ಮಿಕ ಮತ್ತು ಟ್ರೆಕ್ಕಿಂಗ್ ಹೋಗುವವರಿಗೆ ಇದೊಂದು ಹೇಳಿ ಮಾಡಿಸಿರೋ Two-in-One ಸ್ಥಳ.  ವೀಕೆಂಡಲ್ಲಿ ಒಂದು ದಿನದ  ಪ್ರವಾಸ/ಟ್ರೆಕ್ಕಿಂಗ್ ಹೋಗಿ ಮಸ್ತ್ ಎಂಜಾಯ್ ಮಾಡಿ ಬರೋರಿಗೆ ರಸಗುಲ್ಲ ತಿಂದಂಗೆ.
ಇದೊಂದು ಧಾರ್ಮಿಕವಾಗಿ ಪವಿತ್ರ ಸ್ಥಳ. ಇಲ್ಲಿ ಪಾತಳಗಂಗೆ, ಒಳಕಲ್ಲು ತೀರ್ಥ, ನಂದಿ(ಬಸವ) ಮತ್ತು ವೀರಭದ್ರೇಶ್ವರ ದೇವಾಲಯಗಳಿವೆ . ಶಿವಗಂಗೆಗೆ ಇನ್ನೊಂದು ಹೆಸರೇ ದಕ್ಷಿಣದ ಕಾಶಿ. ಇಲ್ಲಿನ ಇನ್ನೊಂದು ಮಹಿಮೆ ಅಂದರೆ ನೀವೇನಾದರು ತುಪ್ಪದ ಅಭಿಷೇಕ ಮಾಡಿಸಿದ್ರೆ ಅದು ಬೆಣ್ಣೆಯಾಗುತ್ತೆ

 ಬೆಟ್ಟದ ಬಗ್ಗೆ ನಾ ಬಾಳ ಹೇಳಾಕ ಹೋಗಂಗಿಲ್ಲ.. ಎಲ್ಲಾ ನಾನೇ ಬರೆದರೆ ಹೆಂಗ್ರೀ..  ನೀವು ಒಂದಿಷ್ಟು ಗೂಗಲಲ್ಲಿ ಹುಡುಕ್ರಿ.. :)


ಪ್ರವಾಸ ಕಥನ/ಟ್ರೆಕ್ಕಿಂಗ್  ವಿವರ:-

ಬೆಳಿಗ್ಗೆ 6:30  ಕ್ಕೆ ಎಲ್ಲರೂ ಮೆಜೆಸ್ಟಿಕ್ ಹತ್ತಿರವಿರೋ ವಾಯು ವಜ್ರ ಬಸ್ stop ಹತ್ತಿರ ಬಂದು ಸೇರಿದರು(ನನ್ನನು ಬಿಟ್ಟು). ಹರೀಶ್ ಅವರ್ನೆಲ್ಲ ಬಿಟ್ಟು ನನ್ನನ್ನು ಪಿಕ್ ಮಾಡೋಕೆ ಬಂದ. 
ನಾನು ಕರ್ನಾಟಕದ ವಿಧಾನಸಭೆ ಚುನಾವಣೆಗೆ ಮತದಾನ ಮಾಡಬೇಕಾಗಿರೋದ್ರಿಂದ ಬೈಕ್ ಮೇಲೆ ಬಂದು ಟ್ರೆಕ್ಕಿಂಗ್ ಮುಗಿದ ಮೇಲೆ ಬೇಗ ಮರಳಿ ಬೆಂಗಳೂರಿಗೆ ಬಂದು ನನ್ನ  ಅತ್ಯಮೂಲ್ಯವಾದ ಮತವನ್ನು ಚಲಾವಣೆ ಮಾಡಬೇಕು ಅಂತ, ನಾನು ಮತ್ತು ಹರೀಶ್ ಬೈಕ್ ಮೇಲೆ ಪ್ರಯಾಣ ಅಂತ ಡಿಸೈಡ್ ಮಾಡಿದ್ವಿ. 
ಅದ್ಯಾಕೋ ಮಾರಾಯ ಈ ರಾಜಕೀಯ ಕಂಡರ ಇತ್ತಿತ್ಲಾಗೆ ನಮಗೆ ಬಾಳ ಸಿಟ್ಟ(ಕೋಪ) ಬರ್ತಾದ.. ನಾವು voting is a right ಅಂತ ವೋಟು ಹಾಕಿ ಈ ರಾಜಕಾರಣಿಗಳನ್ನ ಗೆಲ್ಲಿಸಿ ಮೆರವಣಿಗೆ ಮಾಡಿ ಬೆಂಗಳೂರಿಗೆ ಹೋಗಿ ವಿಧಾನಸಭೆಯಲ್ಲಿ ಸ್ವಲ್ಪ ಜಗಳ ಮಾಡಿ ನಮ್ಮೊರಿಗೂ ಸ್ವಲ್ಪ ಎಲ್ಲರಿಗೂ ಒಳ್ಳೆದಾಗಂಗೆ ಒಂದಿಷ್ಟು ಕೆಲಸ ಮಾಡಿ ಉಧ್ದಾರ ಮಾಡ್ರೋ ಅಂದ್ರ ಇವರೇನು ಮಾಡ್ತಾರ ಗೊತ್ತೇನ್ರಿ . 
ಚುನಾವಣಾ ಟೈಮ್ನ್ಯಾಗ ಒಂದಿಷ್ಟು ರೋಖ(ಹಣ) ಮತ್ತು ಎಣ್ಣೆ (ಸರಾಯಿ) ಹಂಚತಾರ. ಒಂದ್ ಸಾರಿ ಗೆದ್ರು ಅಂದ್ರ ಮುಗಿತು, ಮುಂದಿನ ಐದು ವರ್ಷ ಅವರು ಚುನಾವಣೆ ಟೈಮಲ್ಲಿ ಕರ್ಚು ಮಾಡಿರೋದಕ್ಕೆ ಬಡ್ಡಿ, ಚಕ್ರ ಬಡ್ಡಿ, ಅದರ ಅಜ್ಜಿ, ಅಜ್ಜನ ಬಡ್ಡಿ ಇನ್ನೂ ಏನೇನೊ ಸೇರಿಸಿ ಲೆಕ್ಕ ಮಾಡಿ ಎಳ್ಳಷ್ಟು ಬಿಡದಂಗೆ ವಸೂಲಿ ಮಾಡ್ತಾರ. 
ಇನ್ನೊಂದು ಹೇಳಬೇಕಂದ್ರ ಚುನಾವಣೆಗೂ ಮುಂಚೆ ಈ ರಾಜಕಾರಣಿಗಳ ಆಸ್ತಿ ಕಡಿಮೇನೆ ಇರುತ್ತೆ. ಆದರೆ ಗೆದ್ದ ಮೇಲೆ ಇವರ ಆಸ್ತಿ ಹೇಗೆ ಬೆಳೆಯುತ್ತೆ ಅಂದ್ರೆ, ಮಲ್ಟಿ speciality ಹಾಸ್ಪಿಟಲಲ್ಲಿ ಬಡ ರೋಗಿಗೆ ಡಾಕ್ಟರು ಬಿಲ್ ತೋರಿಸಿದಾಗ ಅದನ್ನ ನೋಡಿ ಅವನ BP ಹೆಂಗೆ ಹೈ ಸ್ಪೀಡಲ್ಲಿ ಏರುತ್ತೋ ಹಂಗೆ ಇವರ ಆಸ್ತಿ ಕೂಡ ವರ್ಷ ಕಳೆದಂತೆಲ್ಲ ಲೆಕ್ಕ ಮಾಡೋದಕ್ಕೆ ಮಷೀನ್ ಬೇಕೇ ಬೇಕು ಅನ್ನೋ ಹಾಗೆ ಬೆಳಿತಾ ಹೋಗುತ್ತೆ..

"ಇವರೇನು ಬದಲಾಗಾಂಗಿಲ್ಲ ನಮ್ಮ ದೇಶ ಉದ್ದಾರಾಗಾಂಗಿಲ್ಲ ನಡೀರಿ ಅತ್ಲಾಗ"
ಸಾಕು ಬಿಡ್ರಿ ಇವರ ಬಗ್ಗೆ ಮಾತಾಡಿದರ ನಮ್ದ ಟೈಮ್ ವೇಸ್ಟ್....  ನಮ್ ಟ್ರೆಕ್ಕಿಂಗ್ ಕಡೆ ಹೊಗಾನು ಬರ್ರೀ, 

 ಬೆಳಿಗ್ಗೆ 6:45  ಕೆಂಪೆಗೌಡ ಬಸ್ ನಿಲ್ದಾಣದಿಂದ 12 ಜನರು KSRTC ಬಸ್ಸಲ್ಲಿ ಹೊರಟರು. ಹರೀಶ್ ಮತ್ತು ನಾನು ಬೈಕ್ ಮೇಲೆ ಅವರಿಗಿಂತ ಸ್ವಲ್ಪ ಮುಂದೇನೆ ಹೋಗಿ ದಾಬಸಪೇಟೆ ಹತ್ತಿರ ಕಾಯುತ್ತಿದ್ದೆವು. 
ಎಲ್ಲರೂ ದಾಬಸಪೇಟೆಯಲ್ಲಿ ಬೆಳಿಗ್ಗೆ 7:45 ಕ್ಕೆ ಸೇರಿದೆವು. ಚುನಾವಣೆ ಇರೋದ್ರಿಂದ ಹೊಟೆಲಗಳೆಲ್ಲ ಮುಚಿದ್ದವು. ನಮ್ಮ ಪುಣ್ಯಾಕ್ಕೆ ಅನ್ನೋ ಹಂಗ ಅಲ್ಲೇ ಒಂದು ಚಿಕ್ಕ ಹೋಟೆಲ್ ತಗೆದಿತ್ತು. ತಟ್ಟೆ ಇಡ್ಲಿ ಮತ್ತು ರೈಸ್ ಬಾತ್ ತಿಂದು ಮದ್ಯಾನ ಊಟಕ್ಕೆ ರೈಸ್ ಬಾತ್ ಪಾರ್ಸೆಲ್ ಮಾಡಿಸ್ಕೊಂಡ್ವಿ. ಅಲ್ಲಿಂದ ನಾನು ಮತ್ತು ಹರೀಶ್ ಬೈಕ್ ಮೇಲೆ ಮತ್ತು ಉಳಿದವರೆಲ್ಲ ಒಂದು ಆಟೋದಲ್ಲಿ ಶಿವಗಂಗೆಗೆ ಹೊರೆಟೆವು...  


ಆಟೋದಲ್ಲಿ ಶಿವಗಂಗೆ ಊರಿಗೆ ಸೇರೋಡ್ರೋಳ್ಗೆ ಸಮಯ ಬೆಳಿಗ್ಗೆ 9 ಆಗಿತ್ತು. ಚುನಾವಣೆ ಇರೋದ್ರಿಂದ ವಾಹನಗಳನ್ನು ವೋಟಿಂಗ್ ಕೋಣೆಗೆ ಹತ್ತಿರ ಬಿಡೋದಿಲ್ಲ ಆದ ಕಾರಣ ಆಟೋದವನು ನಮ್ಮನ್ನ ಸ್ವಲ್ಪ ದೂರದಲ್ಲಿಯೇ ಬಿಟ್ಟು ಹೋದ, ಅಲ್ಲಿಂದ ಬೆಟ್ಟದ ಮುಖ್ಯ ದ್ವಾರಕ್ಕೆ ನಡಿಯೋಕೆ ಮತ್ತೆ 10 ನಿಮಿಷಗಳು ಬೇಕಾಯ್ತು . 
ಹಂಗೋ ಹಿಂಗೋ ಮಾಡಿ ಬೆಳಿಗ್ಗೆ 9:15 ಕ್ಕೆ ಮುಖ್ಯ ದ್ವಾರದ ಹತ್ತಿರ ಗ್ರೂಪ್ ಫೋಟೋ ತಗೆದುಕೊಳ್ಳುವ ಮೂಲಕ ನಮ್ಮ ಟ್ರೆಕ್ಕಿಂಗ್ ಶುರು ಮಾಡಿದ್ವಿ.

ಶಿವಗಂಗೆ ಬೆಟ್ಟದ ಮುಖ್ಯ ದ್ವಾರ

ಶಿವಗಂಗೆ

ಶಿವ

@ ಶಿವಗಂಗೆ

@ ಶಿವಗಂಗೆ

ಆವಾಗಲೇ ಬಿಸಿಲಿನ ರೌದ್ರಾವತಾರ  ಚಾಲು ಆಗಿತ್ತು. ಸುಡು ಬಿಸಿಲಿನಲ್ಲೇ ಬೆಟ್ಟ ಹತ್ತುತ್ತಿದ್ದೆವು.  ಬಿಸಿಲಿನ ಪ್ರಭಾವದಿಂದ ಎಲ್ಲರಿಗೂ ಬೇಗನೆ ಆಯಾಸವಾಗುತ್ತಿತ್ತು.  ಮೆಟ್ಟಿಲುಗಳಿದ್ದರೂ ಕೂಡ ಬಿಸಿಲಿಗೆ ಬೆವರು ಸುರಿಯೋದಕ್ಕೆ ಪ್ರಾರಂಬಿಸಿರೋದ್ರಿಂದ ನಮಗೆ ಹತ್ತೋಕೆ ಕಷ್ಟ ಅನಿಸುತ್ತಿತ್ತು.  ಆದರೂ ಯಾರು ಟ್ರೆಕ್ಕಿಂಗ್ ಹುಮ್ಮಸ್ಸನು ಕಳೆದುಕೊಳ್ಳದೆ ನಡೆ ಮುಂದೆ ನೀ ನಡೆ ಮುಂದೆ ಅಂತ ಸಾಗುತಲಿದ್ದರು.  ಮಾರ್ಗ ಮಧ್ಯೆ ತುಂಬಾನೆ ಅಂದ್ರೆ ತುಂಬಾನೇ ವಿಶ್ರಾಂತಿ ತಗೆದುಕೊಳ್ಳುತ ನಡೆದಿತ್ತು ನಮ್ಮ ಟ್ರೆಕ್ಕಿಂಗ್ ಪಯಣ. ಹಾದೀಲಿ ಬಹಳಷ್ಟು ಗೋಪುರಗಳು ಮತ್ತು ದೇವಸ್ಥಾನಗಳಿವೆ. ನಾವು ಬಿಸಿಲಲ್ಲಿ ಬೆವತಿದ್ದರು ಫೋಟೋಸ್ ಗೆ ಪೋಸ್ ಕೊಡೋದು ಮಾತ್ರ ನಿಲ್ಲಿಸ್ತಿರಲಿಲ್ಲ..

ಒಳಕಲ್ಲು ತೀರ್ಥ ಗುಡಿಗೆ ಬಂದು ಕೆಲವರು ವಿಶ್ರಾಂತಿ ತಗೆದುಕೊಂಡರು. ನಾನು ಮತ್ತು ಇನ್ನು ಕೆಲವರು ಅಲ್ಲೇ ಇರುವ ದೇವಸ್ಥಾನದ ದರ್ಶನಕ್ಕೆ ಹೋದ್ವಿ. 
ಈ ಒಳಕಲ್ಲು ತೀರ್ಥ ಸಿಗೋದು ಒಂದು ದೊಡ್ಡ ಕಲ್ಲು ಬಂಡೆಯಲ್ಲಿರೋ ದೇವಸ್ಥಾನದಲ್ಲಿ.  ಪ್ರಾರ್ಥನೆ ಮಾಡಿ ಮನಸಿನಲ್ಲಿ ಏನಾದ್ರು ಬೇಡಿಕೊಂಡು ಈ ಒಳಕಲ್ಲಿನಲ್ಲಿ ಕೈ ಹಾಕಿದರೆ ನೀರು ಸಿಗುತ್ತೆ ಅನ್ನೋ ಜನರ ನಂಬಿಕೆ ಇದೆ. ನಮ್ಮಲ್ಲಿ ಕೆಲವರಿಗೆ ಈ ಪವಿತ್ರ ತೀರ್ಥ ಕೈಗೆ ಸಿಕ್ಕಿತು ಮತ್ತು ಕೆಲವರ ಕೈಗಳು ಚಿಕ್ಕದಾಗಿರೋದ್ರಿಂದ ಮರಳಿ ಮರಳಿ ಪ್ರಯತ್ನಿಸಿದರೂ ನೀರು ಸಿಗಲಿಲ್ಲ.
ಈ ದೇವಸ್ಥಾನದ ಬಗ್ಗೆ ಇನ್ನೊಂದು ಸ್ವಲ್ಪ ಹೇಳಬೇಕಂದ್ರೆ ಒಳಗಡೆ ಅದು ತುಂಬಾ ತಣ್ಣಗಿದೆ. ಅಲ್ಲೇ ಕುಳಿತುಬಿಡೋಣ ಅನಿಸ್ತಿತ್ತು. ಮತ್ತೆ ಸ್ವಲ್ಪ ಕ್ಯಾಮೆರಾಗೆ ಪೋಸ್ ಕೊಟ್ಟು ಮುಂದೆ ಸಾಗಿದೆವು.

ಒಳಕಲ್ಲು ತೀರ್ಥ


ಒಳಕಲ್ಲು ತೀರ್ಥ


ನೋಡ್ರಿಪಾ ಯಾರಿಗೆ ಸಿಕ್ಕಿಲ್ಲ ಇಲ್ಲಿಂದಾನೆ  ಒಳಕಲ್ಲು ತೀರ್ಥ ತಗೋರಿ

ಒಳಕಲ್ಲು ತೀರ್ಥ

ಒಳಕಲ್ಲು ತೀರ್ಥ

ಒಳಕಲ್ಲು ತೀರ್ಥ

ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು. ಪಕ್ಕದಲ್ಲೇ ಇರುವ ಜ್ಯೂಸು ಅಂಗಡಿಯಲ್ಲಿ ತಂಪಾದ ಮಜ್ಜಿಗೆ ಮತ್ತು ಲೆಮನ್ ಜ್ಯೂಸು ಕುಡಿದೆವು. ಎಂಜಿನುಗಳೆಲ್ಲ ಇಂಧನವಿಲ್ಲದೆ ಮುಂದೆ ಸಾಗೊಕಾಗದೆ ಬೆವತಿರೋ ಸಮಯದಲ್ಲಿ ಈ ಜ್ಯೂಸು ಮತ್ತೆ ಶುದ್ದೀಕರಿಸಿರುವ ಇಂಧನ ತುಂಬಿದಂಗಾಯಿತು. 


ಶಿವಗಂಗೆ 

ಶರಬತ್(ಜ್ಯೂಸು) ಕುಡಿಯುವ ಸಮಯ

ಇಲ್ಲಿಂದಾನೆ ಅಸಲಿ ಟ್ರೆಕ್ಕಿಂಗ್ ಶುರುವಾಗೋದು..   ಸುಮಾರು 75 - 80 ಡಿಗ್ರೀ ಇಳಿಜಾರಿಗೆ ಅಭಿಮುಖವಾಗಿರೋ ಬೆಟ್ಟ ಹತ್ತಬೇಕು. ಮೆಟ್ಟಿಲುಗಳಿವೆ ಮತ್ತು ಆಸರೆಗೆ rails ಹಾಕಿದ್ದಾರೆ. ಇನ್ನೊಂದು ವಿಷಯ ಹೇಳೋದೇ ಮರ್ತಿದ್ದೆ ಈ ಬೆಟ್ಟದಲ್ಲಿ ವಾನರ ಸೈನ್ಯ ತುಂಬಾ ಬಲಿಷ್ಟವಾಗಿದೆ. ನೀವು ಅಪ್ಪಿ ತಪ್ಪಿ ಮೈ ಮರೆತು ಬೆಟ್ಟ ಹತ್ತುತ್ತಿದ್ದರೆ ನಿಮ್ಮ ಬ್ಯಾಗುಗಳನ್ನ ಕಿತ್ತುಕೊಂಡು ಹೋಗುತ್ತವೆ. ಅಲ್ಲಿಂದ ಮುಂದೆ ಹೋದರೆ ನಂದಿ ವಿಗ್ರಹವಿದೆ.. ನಂದಿಗೆ ನಮಸ್ಕರಿಸಿ ಮತ್ತೆ ಕ್ಯಾಮೆರಾಗೆ ಪೋಸ್ ಕೊಟ್ಟು ಮುಂದೆ ಸ್ವಲ್ಪ ಸಾಗಿ ಬೆಟ್ಟದ ತುದಿ ಮುಟ್ಟಿದೆವು .

@ ಶಿವಗಂಗೆ

@ ಶಿವಗಂಗೆ


@ ಶಿವಗಂಗೆ


ಬಸವ (ನಂದಿ)

@ ಶಿವಗಂಗೆ

@ ಶಿವಗಂಗೆ



ಬೆಟ್ಟದ ಮೇಲೆ ಹೋಗಿ ದೇವಸ್ಥಾನಕ್ಕೆ ಭೇಟಿ ಕೊಟ್ಟು. ಸ್ವಲ್ಪ ಸುತ್ತಾಡಿ, ಬೆಟ್ಟದ ಮೇಲಿಂದ ಸುತ್ತಲಿನ ಪ್ರಕೃತಿಯನ್ನ ನೋಡಿದರೆ ಯಾರೋ ಕಲೆಗಾರ ಕಲೆಯಲ್ಲಿ ಮೈ ಮರೆತು ಚಿತ್ರಿಸಿದ್ದಾನೇನೋ ಅಂತ ಭಾಸವಾಗುತ್ತಿತ್ತು . ಅದೆಷ್ಟು ಚೆಂದ, ಅದೆಷ್ಟು ಅಂದ. ಆ ಪ್ರಕೃತಿಯ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸಲು ಸಾದ್ಯವೇ?.  ಆ ಬೆಟ್ಟದ ಮೇಲೆ ನಿಂತು ಒಂದು ಸುತ್ತು ನೋಡಿದರೆ, ಅಲ್ಲಲ್ಲಿ ಕಾಣೋ ಚಿಕ್ಕ ಚಿಕ್ಕ ಹಳ್ಳಿಗಳು. ಬಯಲು ಸೀಮೆಯಲ್ಲೂ ಅಲ್ಲಲ್ಲಿ ತೋಟ, ಹೊಲ, ಗದ್ದೆ, ಚಿಕ್ಕ ಚಿಕ್ಕ ಕೆರೆ-ಕಟ್ಟೆಗಳು. ಸೃಷ್ಟಿಸಿರೋ ಭಗವಂತ ಸಂತೋಷವನ್ನ ಈ ಪ್ರಕೃತಿಯ ಜೊತೆಗೆ ಇಟ್ಟಿದ್ದಾನೆ. ಹುಡುಕೋ ಪ್ರಯತ್ನ ಮಾಡಿದ್ರೆ ಖಂಡಿತ ಆ ಸಂತೋಷ ನಮಗೆ ಸಿಗುತ್ತದೆ ಈ ಪ್ರಕೃತಿಯ ಮೂಲಕ. ಮುಂಜಾನೆ ಅಥವಾ ಸಂಜೆ ಬೆಟ್ಟ ಹತ್ತಿದ್ದರೆ ಹಕ್ಕಿಗಳ ಇಂಚರ ಕೆಳುತ್ತಿದ್ದವೇನೋ ಆದರೆ ಮದ್ಯಾಹ್ನ ಸುಡು ಬಿಸಿಲಿನಲ್ಲಿ ಅವು ಯಾವ ಮರದ ಪೊಟರೆಯ ತಂಪಿನಲ್ಲಿ ನಿದ್ರಿಸುತ್ತಿದ್ದವೋ .


@ ಶಿವಗಂಗೆ




@ ಶಿವಗಂಗೆ

@ ಶಿವಗಂಗೆ


ಹಂಗ ನನ್ photography

ಹಂಗ ನನ್ photography

ಹಂಗ ನನ್ photography

ಹಂಗ ನನ್ photography

ಪುಷ್ಕರಿಣಿ 

@ ಶಿವಗಂಗೆ

@ ಶಿವಗಂಗೆ

@ ಶಿವಗಂಗೆ

@ ಶಿವಗಂಗೆ

@ ಶಿವಗಂಗೆ

ಯಾಹೂ ಟ್ರೆಕ್ ಮಸ್ತ್ ಮಸ್ತ್




ಸ್ವಲ್ಪ ವಿಶ್ರಾಂತಿ ತಗೆದುಕೊಂಡು ಸುಮಾರು ಮದ್ಯಾಹ್ನ 1:40ಕ್ಕೆ ಕೆಳಗಿಳಿಯೋದಕ್ಕೆ ಶುರುಮಾಡಿದ್ವಿ ಒಳಕಲ್ಲು ತೀರ್ಥವಿರೋ ದೇವಸ್ಥಾನದ ಹತ್ತಿರ ಒಂದು ಚಿಕ್ಕ ಮಂಟಪ/ಮನೆಯಲ್ಲಿ ಊಟ ಮಾಡಿ, ಅಲ್ಲಿಂದ ಹೊರಟು ಸುಮಾರು ಮದ್ಯಾಹ್ನ 2:50ಕ್ಕೆ ಮುಖ್ಯ ದ್ವಾರ ತಲುಪಿದ್ವಿ.
@ ಶಿವಗಂಗೆ


BTC ಪರಿವಾರದಿಂದ ಮತ್ತೊಂದು ಯಶಶ್ವಿ ಟ್ರೆಕ್ಕಿಂಗ್ ಮಾಡಿದ್ವಿ.  ಎಲ್ಲರಿಗೂ ನಾನು ಮತ್ತು ಹರೀಶ ಕೃತಜ್ಞತೆಗಳನ್ನು ಹೇಳಿ ಬೈಕ್ ಮೇಲೆ ಬೆಂಗಳೂರಿಗೆ ಹೊರೆಟೆವು. ಉಳಿದವರೆಲ್ಲ ಆಟೋದಲ್ಲಿ ದಾಬಸಪೇಟೆಗೆ ಬಂದು ಅಲ್ಲಿಂದ ಬೆಂಗಳೂರಿನ ಬಸ್ಸಲ್ಲಿ ಅಂದರೆ ಬಸ್ಸಿನ ಮೇಲೆ ಕುಳಿತು ಮಸ್ತ್ ಮಜಾ ಮಾಡುತ ಸಾಯಂಕಾಲ 5:40 ಕ್ಕೆ ಬೆಂಗಳೂರು ಸೇರಿದರು (ಚುನಾವಣೆ ಇರೋದ್ರಿಂದ ಸರಕಾರಿ ಬಸ್ಸುಗಳೆಲ್ಲ ಚುನಾವಣಾ ಕೆಲಸಕ್ಕೆ ತಗೆದುಕೊಂಡಿದ್ದರು ಆದುದರಿಂದ ಬಸ್ಸಿನ ಮೇಲೆ ಕುಳಿತು ಪ್ರಯಾಣಿಸೋ ಸೌಭಾಗ್ಯ ನಮ್ಮ ಟ್ರೆಕ್ಕಿಂಗ್ ಪರಿವಾರಕ್ಕೆ ದೊರಕಿತು).. 



ಕೃತಜ್ಞತೆಗಳು:-
ಚೈತನ್ಯಕುಮಾರ್  ಎ   ( ಟ್ರೆಕ್ಕಿಂಗ್  ವ್ಯವಸ್ತಾಪಕರು )
ಮತ್ತು ಟ್ರೆಕ್ಕಿಂಗಲ್ಲಿ  ಬಾಗವಹಿಸಿದ ಎಲ್ಲ ಗೆಳೆಯ ಗೆಳತಿಯರಾದ ಹರೀಶ್, ವಿನಯಕುಮಾರ್, ಶಬ್ಬೀರ್, ಶ್ರುತಿ, ಸೋಮು ನಿಡೋಣಿ, ವರುಣ್, ಗೌತಮ್, ವೀರು, ದೀಪಿಕಾ, ದೀಪಕ್, ವಿವೇಕ್ ಮತ್ತು ನಾನು 

ವಿಶೇಷ ಕೃತಜ್ಞತೆಗಳು:- 
ಈ ಬ್ಲಾಗ್ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿಬರಲು ನನಗೆ ಬರೆಯಲು ಸಹಾಯ ಮಾಡಿದ ನನ್ನ ಗೆಳೆಯ ಸುರೇಂದ್ರಕುಮಾರ್  (ಮಧುಗಿರಿ) 


ಮಾಹಿತಿ:-

ಟ್ರೆಕ್ಕಿಂಗ್ ದೂರ : ಸುಮಾರು 4 ಕಿ.ಮೀ.
ಬೆಟ್ಟ ಹತ್ತುವ ದೂರ: ಮುಖ್ಯ ದ್ವಾರದಿಂದ ಬೆಟ್ಟದ ತುದಿಗೆ ಸುಮಾರು ಕಿ.ಮೀ..
ಬೆಟ್ಟ ಇಳಿಯುವ ದೂರ: ಬೆಟ್ಟದ ತುದಿಯಿಂದ ಕೆಳಗಿರೋ ಮುಖ್ಯ ದ್ವಾರಕ್ಕೆ ಸುಮಾರು ಕಿ.ಮೀ.

ಹತ್ತಿರದ ಪಟ್ಟಣ: ದಾಬಸಪೇಟೆ


ಸ್ಥಳ: ಶಿವಗಂಗೆ, ತುಮಕೂರು  ತಾಲೂಕು ಮತ್ತು ಜಿಲ್ಲೆ 
ದೂರ: 60 ಕಿ.ಮೀ.
ಬೆಂಗಳೂರಿನಿಂದ  ದಾಬಸಪೇಟೆಗೆ  52 ಕಿ.ಮೀ. ಮತ್ತು ದಾಬಸಪೇಟೆಯಿಂದ ಶಿವಗಂಗೆ 8 ಕಿ.ಮೀ.
ಹೋಗುವ ಬಗೆ: ಸ್ವಂತ ವಾಹನ/ ಬಸ್ಸು/ರೈಲು
ಮಾರ್ಗ:-
ಬೆಂಗಳೂರು( NH-4 Highway)-->ದಾಬಸಪೇಟೆ -->ಶಿವಗಂಗೆ  



For more details in English;-

My friends have written very good blogs, have a look at these blogs too.







....ಸಲಹೆ ಸೂಚನೆಗಳನ್ನು  ಹೃತ್ಪೂರ್ವಕವಾಗಿ ಸ್ವೀಕರಿಸುತ್ತೇನೆ .....




Monday, 29 April 2013

ಮಧುಗಿರಿ ಬೆಟ್ಟದ ಮೇಲೆ ಆರು ರಾಜರ ಆಕ್ರಮಣ...............................(Trek to Madhugiri Hill) 31-03-2013


ಮಧುಗಿರಿ:-
ಮಧುಗಿರಿ (3930 ft) ಇದು ಏಷಿಯಾದ ಖಂಡದ ಎರಡನೆ ಒಂದೇ ಕಲ್ಲಿನ(ಏಕ ಶಿಲಾ) ದೊಡ್ಡ ಬೆಟ್ಟ... ಜನರು ಇದನ್ನ "VERTICAL  LIMIT, DARING  TREK ಇತ್ಯಾದಿ ಇತ್ಯಾದಿಯಾಗಿ ಕರಿತಾರೆ. ಇದರ ಇನ್ನೊಂದು ವಿಶೇಷತೆಯೆಂದರೆ 11  ಗೋಡೆಗಳಿವೆ.. ಇದೊಂದು ಒಂದು ದಿನದ(ದಿನಕ್ಕೆಂದೇ ಹೇಳಿಮಾಡಿಸಿದ) ಮಸ್ತ್ ಟ್ರೆಕ್ಕಿಂಗ್ ಜಾಗ... ಇದರ ಬಗ್ಗೆ ಇನ್ನೂ  ಜಾಸ್ತಿ ತಿಳಿದುಕೋಬೇಕು ಅಂದ್ರೆ ಗೂಗಲ್ನಲ್ಲಿ ಸರ್ಚ್ ಮಾಡಿ:)

ಟ್ರೆಕ್ಕಿಂಗ್ ವಿವರ:-

ವ್ಯವಸ್ತಿತ ಪ್ಲಾನ್ ಪ್ರಕಾರ ಬೆಳಿಗ್ಗೆ 5ಕ್ಕೆ ಯಶವಂತಪುರ ಹತ್ತಿರ ಇರೋ ತಾಜ್ ವಿವಾಂತ ಹೋಟೆಲ್ ಇಂದ ಆರು ರಾಜರು ಮಧುಗಿರಿ ಬೆಟ್ಟಕ್ಕೆ ಆಕ್ರಮಣ ಮಾಡಲು ಹೊರೆಟೆವು... 
ಬೇಸಿಗೆ ಇದ್ದರು ಕೂಡ ಆ ದಿನ ಸ್ವಲ್ಪ ಮಂಜು ಕವಿದ ವಾತಾವರಣವಿತ್ತು.. ಮುಂಜಾನೆದ್ದು ಅಂತ ತಂಪಾದ ವಾತವರಣದಲ್ಲಿ ಹೈವೇ ಮೇಲೆ ಬೈಕ್ ರೈಡ್ ಮಾಡೋದು ಅಂದ್ರೆ ಆ ಮಜಾನೆ ಬೇರೆ.. ಆರು ರಾಜರು ಆಕ್ರಮಣಕ್ಕೆ ಬರ್ತಿದ್ದಾರೆ ದಾರಿ ಬಿಡಿ ಅಂತಿದ್ರೆನೋ .. ಹಾಗಿತ್ತು ಆ ಬೆಳಗಿನ ಜಾವದ ಬೈಕ್ ರೈಡಿಂಗ್ ... 
ಸುಮಾರು ಬೆಳಿಗ್ಗೆ 6ಕ್ಕೆ ದಾಬಸಪೇಟೆ ತಲುಪಿ ಅಲ್ಲಿಂದ ಸ್ವಲ್ಪ ಎಡ ತಿರುವು ತಗೆದುಕೊಂಡು ಮಧಿಗಿರಿ ದಾರೀಲಿ ಸಾಗಿತು ಈ ನಮ್ಮ ಆರು ರಾಜರ ಪ್ರಯಾಣ..... 
ಮಾರ್ಗ ಮದ್ಯ ಒಂದು ಚಿಕ್ಕ ಕೆರೆ ಸಿಕ್ಕಿತು ಅದು ಹೇಳಿ ಕೇಳಿ ಸೂರ್ಯೋದಯದ ಸಮಯ.. ಅದುನ್ನ ನಾವು ಮಿಸ್ ಮಾಡ್ಕೊಂತಿವಾ?
ಆ ಕೆರೆ ಹತ್ತಿರ ಹೋಗಿ ಸೂರ್ಯೋದಯವನ್ನು ಕಣ್ಣಾರೆ ಕಂಡು ಕನ್ನಡ ಅರಸು ಮೂವಿಯಲ್ಲಿ ಪುನೀತ್ ರಾಜಕುಮಾರ್ ಹೇಳೋ ಹಾಗೆ ವಾವ್  ಆ ಸನ್ರೈಸ್  ನೋಡ್ರಿ  ಅಂತ ಒಬ್ಬರಿಗೊಬ್ಬರು ಹೇಳುತ ಕುಣಿದಾಡಿದೆವು...:)
ಹಳ್ಳಿಯಲ್ಲಿರೋರಿಗೆ ಇದೊಂದು ಮಾಮೂಲಿ ಸೂರ್ಯೋದಯ ಅನ್ಸುತ್ತೆ ಆದ್ರೆ ಈ ಪ್ಯಾಟೆಯಲ್ಲಿರೋ ಜನರಿಗೆ ಅದು ಒಂದು ಪ್ರಕೃತಿಯ ಅದ್ಭುತವೇ ಸರಿ...  ಈ ಬೆಂಗಳೂರಿನಲ್ಲಿರೋ ಜನ ಬೆಳಿಗ್ಗೆ ಏಳೋದೇ ತುಂಬಾ ಲೇಟು ... ಅವರು ಏಳೋದ್ರೋಳ್ಗೆ ಸೂರ್ಯೋದಯವಾಗಿರುತ್ತೆ... ಅಪ್ಪಿ ತಪ್ಪಿ ಬೆಳಿಗ್ಗೆ ಬೇಗ ಎದ್ದಿದ್ದಾರೆ ಅನ್ಕೋರಿ ಸೂರ್ಯೋದಯದ ಸಮಯದಲ್ಲಿ ಆಫೀಸ್ ಒಳಗೆ ಹೊಕ್ಕಿರ್ತಾರೆ, ಹೊರಗೆ ಬರೋದೆ ಇಲ್ಲ... ಹೀಗಾಗಿ ಅವ್ರಿಗೆ ಸೂರ್ಯೋದಯ ಸೂರ್ಯಾಸ್ತ  ಯಾವಾಗ ಆಗುತ್ತೆ ಅಂತಾನೆ ಗೊತ್ತಿರೋದಿಲ್ಲ....... ಅದಕ್ಕೆ ಈ ಜನರಿಗೆ ಈ ಅನುಭವ ಅಂದರೆ ಏನೋ ಮನಸ್ಸಿಗೆ ಆನಂದ ಮತ್ತು ತೃಪ್ತಿ ಕೊಡುತ್ತೆ. ಅಂತು ಇಂತೂ ಸೂರ್ಯೋದಯ ನೋಡಿದ್ವಿ ಹಂಗೆ ಒಂದಿಷ್ಟು ಫೋಟೋಸ್ ತಗೊಂಡು ಮುಂದೆ ಸಾಗಿದೆವು..

ಸೂರ್ಯೋದಯ



ಕೊರಟಗೆರೆಯಲ್ಲಿ ಸರ್ಕಲ್ ನಲ್ಲಿ ಇರೋ ಒಂದು ಹೋಟೆಲ್ನಲ್ಲಿ ನಾಸ್ಟ ಮಾಡಿದ್ವಿ ... 
ಈ ಹೋಟೆಲ್ ಬಗ್ಗೆ ಒಂದೆರಡು ಮಾತು ಜಾಸ್ತೀನೇ ಹೇಳ್ಬೇಕು ಕಣ್ರೀ.. ಯಾಕಂದ್ರೆ ಚಿಕ್ಕದಾದರು ಚೊಕ್ಕ ಮತ್ತು ಒಳ್ಳೆ ಸವಿರುಚಿಯಾದ ರೈಸ್ ಬಾತ್ ಮತ್ತು ತಟ್ಟೆ ಇಡ್ಲಿ ಸಿಗುತ್ತೆ ... ಇದೆಲ್ಲ ಸಿಗೋದು ಅದು ತುಂಬಾ ಕಡಿಮೆ ಬೆಲೆಗೆ ...  ನೀವು ಕೂಡ ಈ ಮಾರ್ಗವಾಗಿ ಹೋದ್ರೆ ಈ ಹೋಟೆಲ್ನಲ್ಲಿ ನಾಸ್ಟ/ಊಟ ಮಾಡೋದನ್ನ ಮಾತ್ರ ಮರಿಬೇಡ್ರಿ... 
ಎಲ್ಲರೂ  ಹೊಟ್ಟೆ ತುಂಬಾ ನಾಸ್ಟ ಮಾಡಿದ್ವಿ... ಹೊಟ್ಟೆಗೆ ಇಂಧನ (fuel) ತುಂಬಿದ ಹಾಗಾಯ್ತು ನೋಡ್ರಿ..  ಅಲ್ಲಿಂದ ಮುಂದೆ ಸಾಗಿ ಬೆಳಿಗ್ಗೆ 8ಕ್ಕೆ ಮಧುಗಿರಿ ಮುಟ್ಟಿದೆವು... 

ಬೈಕ್ ಗಳನ್ನ  ಅಲ್ಲೇ ದೊಡ್ಡ ಮರದ ಕೆಳಗೆ ಪಾರ್ಕ್ ಮಾಡಿ ರೆಡಿ ಆದ್ವಿ ನೋಡ್ರಿ ಟ್ರೆಕ್ಕಿಂಗ್ ಮಾಡೋಕೆ.. ಟ್ರೆಕ್ಕಿಂಗ್  ಶುರು ಮಾಡೋದಕ್ಕೂ ಮೊದ್ಲೇ ಚೈತನ್ಯ ಹೇಳಿದ ಈ ಟ್ರೆಕ್ಕಿಂಗ್ ನಲ್ಲಿ ತುಂಬಾ ಟ್ವಿಸ್ಟ್ ಮತ್ತು surprises ಇವೆ ಅಂತ...
"HAMLA  KAROO" ಅನ್ನೋ ಜಯಗೋಸ್ಟಿಯೊಂದಿಗೆ ಬೆಳಿಗ್ಗೆ 8. 15ಕ್ಕೆ ಟ್ರೆಕ್ಕಿಂಗ್  ಚಾಲು ಮಾಡಿದ್ವಿ ನಮ್ಮ ಈ ಟ್ರೆಕಿಂಗ್ ಯುದ್ದ...
ಜಬರ್ದಸ್ತ್  ನಾಸ್ಟ ಮಾಡಿರಿ ನಡೀರಿನ್ನ ಟ್ರೆಕ್ಕಿಂಗ್ ಯುದ್ದಕ್ಕೆ 

ನಿಜ ಹೇಳ್ಬೇಕು ಅಂದ್ರೆ ಮಧುಗಿರಿ ಬೆಟ್ಟ, ಇದೊಂದು ಬೃಹದಾಕಾರದ ಕಲ್ಲು ಬಂಡೆ. ಕೆಳಗಡೆಯಿಂದ ನಿಂತು ನೋಡಿದ್ರೆ ಒಂದು ದೊಡ್ಡ ಕಲ್ಲು ಬಂಡೆ  ಅದನ್ನು ಶಿಲ್ಪಕಲೆಗಾರ ವರ್ಣರಂಜಿತವಾಗಿ ಕೆತ್ತಿದ್ದಾನೆ ಅನ್ಸುತ್ತೆ. ಮುಖ್ಯ ದ್ವಾರದ ಹತ್ತಿರ ಒಂದಿಷ್ಟು ಫೋಟೋಸ್ ತಗೊಂಡು ಮುಂದೆ ಸಾಗಿದ್ವಿ.
ಆವಾಗಲೇ ಸುಡುಬಿಸಿಲು ತನ್ನ ಪ್ರಭಾವ ಬೀರುತ್ತಿತ್ತು . ಆದರೆ ಚೈತನ್ಯರವರ ಮುಂದಾಳತ್ವ, ಕೊರಟಗೆರೆ ನಾಸ್ಟದ ಎನರ್ಜಿ ಮತ್ತು ನಮ್ಮಲ್ಲಿರೋ ಈ ಬೆಟ್ಟಾನ ಆಕ್ರಮಣ ಮಾಡಬೇಕೆಂಬ ಹುಮ್ಮಸ್ಸು ಆ ಬಿಸಿಲಿನ ಪ್ರಭಾವಕ್ಕೊಳಗಾಗದೆ ಮುಂದೆ ಹೊರಟಿತು ನಮ್ಮ ಟ್ರೆಕ್ಕಿಂಗ್  ಯುದ್ದ.
ಸ್ವಲ್ಪ  ಮುಂದೆ ಹೋದ್ರೆ ಅಲ್ಲೊಂದು ಕಲ್ಲು ಬಂಡೆ ತುದಿಗಾಲಲ್ಲಿ ನೆಲ ನೋಡುತ ನಿಂತಿತ್ತು... ನಾವು ಅದರ ಕೆಳಗೆ ನಿಂತು ಏನು ನಾವೇ ಅದನ್ನ ತಳ್ಳಿದ್ವಿ ಅನ್ನೋ ಹಾಗೆ ಪೋಸ್ ಕೊಟ್ವಿ... ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದನ್ನ ಧೈತ್ಯ ಗುರು  ಹಾಗೆ ಹಿಡಿದು ನಿಲ್ಲಿಸೋಕೆ ಪ್ರಯತ್ನಿಸಿದ ಹಾಗೆ ಪೋಸ್ ಕೊಟ್ರು..:) ಇನ್ನು ಕೆಲವರು ಇನ್ನೆರಡು ಹೆಜ್ಜೆ ಮುಂದೆ ಹೋಗಿ ಘಟದ್ಗಜನ(ಘಟೋದ್ಗಜನ) ಹಾಗೆ ಕಿರು ಬೆರಳಲ್ಲಿ ಆ ಬೃಹದಾಕಾರದ ಬಂಡೆನ ಅಲುಗಾಡಿಸಿದ್ರು...
ಅಲ್ಲಿಂದ ಇನ್ನು ಸ್ವಲ್ಪ ಮುಂದೆ ಸಾಗಿದರೆ ಅಲ್ಲೊಂದು ಕಮಾನ್ ಇದೆ ( ಬಿಜಾಪುರದಲ್ಲಿ ಬಾರಾ ಕಮಾನ್ ಇರೋ ಹಾಗೆ). ಅದರ ಮೇಲೆ ಒಂದೊಂದು ಕಂಬದ ಮೇಲೆ ಒಬ್ಬೊಬ್ಬರು ನಿಂತು ಪೋಟೋಗೆ ಪೋಸ್ ಕೊಟ್ವಿ... 
ಅದೇನೋ ನಾ ಕಾಣೆ ಹರೀಶ್ ಮಾತ್ರ ಆ ಕಂಬಗಳ ಮೇಲೆ ಬರಲು ತುಂಬಾ ಹೆದರಿದ ಮತ್ತು ಆ ಕಂಬಗಳನ್ನು ನೋಡಿದ್ರೆ ಹರಿಶನ ಹಾವ ಭಾವದಲ್ಲಿ ತುಂಬಾ ಬದಲಾವಣೆಗಳು ಕಾಣಿಸಿದವು..!!!!!!!!!!... ನನಗನಿಸುತ್ತೆ ಹಿಂದಿನ ಜನ್ಮದಲ್ಲಿ ಅವ್ನು ಬಳ್ಳಾರಿ ರಾಜನಾಗಿದ್ದ ಮತ್ತು ಅವ್ನು ಈ ಮಧುಗಿರಿ ರಾಜನ ಮೇಲೆ ಆಕ್ರಮಣ ಮಾಡಿದಾಗ ಇದೆ ಜಾಗದಲ್ಲಿ ಏನೋ ಅವಾಂತರ ನಡೆದಿರಬೇಕು .. ( ಇದರ ಬಗ್ಗೆ ಸವಿಸ್ತಾರವಾಗಿ ಮತ್ತೊಮ್ಮೆ ಮಾತಾಡೋಣ..:).. )



ಅಲ್ಲಿಂದ ಮತ್ತೆ ಸ್ವಲ್ಪ ಮುಂದೆ ಹೋದ್ರೆ ವಾಚ್ ಟವರ್ ಸಿಗುತ್ತೆ.. ಅಲ್ಲಿಂದ ನೀವು ಮಧುಗಿರಿ ನಗರವನ್ನು ನೋಡಿದ್ರೆ ಮಧುಗಿರಿ ತುಂಬಾ ಚೆನ್ನಾಗಿ ಕಾಣಿಸುತ್ತೆ... ಅಲ್ಲಿ ಮತ್ತೆ ಫೋಟೋಸ್ ಗೆ ಪೋಸ್ ಕೊಟ್ಟು ವಾಚ್ ಟವರ್ ಇಂದ ಕೆಳಗೆ ಇಳಿದು ಬರಬೇಕು ಅಂದ್ರೆ ಅಲ್ಲೊಂದು ಕಂಬಿ ಇತ್ತು ಅದರ ಮೇಲೆ ಕುಳಿತು ನಾವು ಮೂರು ಮಂಗಗಳಂತೆ ಪೋಸ್ ಕೊಟ್ವಿ... ಆಮೇಲೆ ಕ್ಯಾಮೆರಾದಲ್ಲಿ ನೋಡಿದ್ರೆ ವಿಸ್ಮಯ ಕಾದಿತ್ತು ರೀ... ಅದು ಮೂರು ಮಂಗಗಳ ಕಥೆ ಅಲ್ಲ ಆಧುನಿಕ ಜಮಾನದ ನಾಲ್ಕನೆಯ ಮಂಗ ಕೂಡ ಹಿಂದಗಡೆಯಿಂದ ಪೋಸ್ ಕೊಟ್ಟಿತ್ತು...!!!!! ನಾಲ್ಕನೆಯ ಮಂಗ ಹೇಗೆ ಪೋಸ್ ಕೊಟ್ಟಿತ್ತು ಅಂತ ಹೇಳೋದು ಸ್ವಲ್ಪ ಕಷ್ಟ ಯಾಕಂದ್ರೆ ಸೆನ್ಸಾರ್ ಕಟ್...:) ಅದರ ಊಹೆಯನ್ನು ನಿಮಗೆ ಬಿಟ್ಟಿದಿನಿ.. ನೀವು ಊಹಿಸಿಕೊಳ್ಳಿ.....

ವಾಚ್ ಟವರ್

ಹಾಗೆ ನಗೆ ಚಟಾಕಿಗಳನ್ನು ಹಾರಿಸುತ ಮುಂದೆ ಸಾಗಿತು ನಮ್ಮ ಟ್ರೆಕ್ಕಿಂಗ್ ಆಕ್ರಮಣ...  ಅದು ಒಂದೇ ಕಲ್ಲಿನ ಬೆಟ್ಟವಾದ್ರಿಂದ ಹತ್ತಲು ಒಂದು ವಿಶೇಷವಾದ ಬೆಟ್ಟವೆನಿಸ್ತಿತ್ತು.. ನಮ್ಮ ಟ್ರೆಕ್ಕಿಂಗ್  ಸಾಗುತಿರಬೇಕಾದ್ರೆ ಒಂದು surprise ಬಂತು ನೋಡ್ರಿ ಅದೇ ಆ ದಾರಿ ಹೇಗಿತ್ತು ಅಂದ್ರೆ ವಾಲಿಕೊಂಡು ಸುಮಾರು 70 -80  ಡಿಗ್ರೀ  ಇಳಿಜಾರಿಗೆ ಅಭಿಮುಖವಾಗಿ ಬೆಟ್ಟ ಹತ್ತಬೇಕಿತ್ತು... ಅದುನ್ನ ನೆನಿಸ್ಕೊಂದ್ರೆ ನಂಗೆ ನಮ್ಮ ಕನ್ನಡ ಹೀರೋ ಅಂಬರೀಶ್ ಓಡೋ ನೆನಪು ಬರುತ್ತೆ... ನೀವೇನಾದ್ರು ಅಂಬರೀಶ್ ಮೂವಿ ನೋಡಿದಿದ್ರೆ ಈ ವಾಲಿಕೊಂಡು ನಡಿಯೋ ಸ್ಟೈಲ್ ತುಂಬಾ ಸಲೀಸಾಗಿ ನಿಭಾಯಿಸ್ತೀರ .. ನೀವೇನಾದ್ರು ಮಳೆಗಾಲ ಅಥವಾ ಮಂಜು ಬೀಳೋ ಸಮಯದಲ್ಲಿ ಇಲ್ಲಿಗೆ ಬಂದರೆ ಈ ಬೆಟ್ಟ ಹತ್ತೊಕಾಗೋದಿಲ್ಲ ಅನ್ಸುತ್ತೆ . 
ಆದರೆ  ಕಬ್ಬಿಣದ rail ಮಾಡಿರೋದ್ರಿಂದ ಆಸರೆಗೆ ಹಿಡಿಗುಕೊಂಡು ಬೆಟ್ಟ ಹತ್ತಬೇಕು... ಅಲ್ಲಿಂದ ಅರಿತು ಮರೆತು ಕೆಳಗೆ ನೋಡಿದರೆ, ಆ ಆಳ ನೋಡಿ ಜೀವ ಕೈಯಲ್ಲಿ ಬಂದಂಗಾಗುತ್ತೆ.. 
ಇದರ ಮದ್ಯ ನಮ್ಮ ಮೇಲೆ ಸೂರ್ಯನ ಉರಿ ಬಿಸಿಲಿನ ಕಿರಣಗಳ ಆರ್ಭಟ ಜಾಸ್ತಿ ಆಗಿತ್ತು.. ಆದರ ಅದರ ಪರಿಣಾಮ ನಮಗೆ ಅಷ್ಟೊಂದು ಆಗಲಿಲ್ಲ ಯಾಕೆ ಗೊತ್ತೇ?  
ವಾಯು ಪುತ್ರ ನಮ್ಮ ಸಪೋರ್ಟ್ ಗೆ ನಿಂತು ತಂಪಾದ ಗಾಳಿ ಬೀಸುತಿದ್ದ, ಆ ತಂಗಾಳಿಯಲಿ ನಾವು ಬೆಂದಿರೋದನ್ನ  ನೋಡಿ ಆ ಸೂರ್ಯದೇವನು ಕೂಡ ಮನಸೋತು ಹೋಗಿದ್ದನೇನೋ ಅನ್ಸುತ್ತೆ...:)

ಇದು ಅಸಲಿ ಮತ್ತು ಭಯಂಕರವಾದ ಟ್ರೆಕ್ಕಿಂಗ್ ಜಾಗ

ಇದು ಅಸಲಿ ಮತ್ತು ಭಯಂಕರವಾದ ಟ್ರೆಕ್ಕಿಂಗ್ ಜಾಗ

ಇದು ಅಸಲಿ ಮತ್ತು ಭಯಂಕರವಾದ ಟ್ರೆಕ್ಕಿಂಗ್ ಜಾಗ

ಇದು ಅಸಲಿ ಮತ್ತು ಭಯಂಕರವಾದ ಟ್ರೆಕ್ಕಿಂಗ್ ಜಾಗ
ಕಹಾನಿ ಮೇ ಟ್ವಿಸ್ಟ್:-
ಅಲ್ಲಿಂದ ಸ್ವಲ್ಪ ಮುಂದೆ ಹೋದ್ರೆ ಹೋ ಕೊನೆಗೂ ಕಷ್ಟಪಟ್ಟು ಬೆಟ್ಟ ಹತ್ತಿದ್ವಿ ಅಂತ ಎಲ್ಲರೂ ಕುಣಿದಾಡಲು ಶುರು ಮಾಡಿದ್ರು... ಅಲ್ಲೇ ಟ್ವಿಸ್ಟ್ ಬಂತು ನೋಡ್ರಿ actually  ಅದು ಬೆಟ್ಟದ ತುದಿ ಆಗಿರಲಿಲ್ಲ.. ಆದರ ಅದು ನೋಡೋದಕ್ಕೆ ಬೆಟ್ಟದ ತುದಿಯಾಗಿದೆ ಅನ್ಸುತ್ತೆ... ಚೈತನ್ಯ ಹೇಳಿದ ಇದು ಬರಿ ಅರ್ಧ ಆಕ್ರಮಿಸಿದ್ದೇವೆ... ಇನ್ನೂ ಅರ್ಧ ಕ್ರಮಿಸಬೇಕು... ಎಲ್ಲರೂ ಒಂದೇ ಹೊಡೆತಕ್ಕೆ  silent.... 
ಇಷ್ಟೊಂದು ಹತ್ತಿದ್ದೇವೆ ಅದೆಷ್ಟು ಇದೆ ನೋಡಿಯೇ ಬಿಡೋಣ ಅಂತ ಸ್ವಲ್ಪ snaps  ತಗೊಂಡು ಮತ್ತೆ ಬೆಟ್ಟ ಹತ್ತಲು ಶುರು ಮಾಡಿದ್ವಿ...  
ಬೆಟ್ಟದ ಮೇಲೆ ಹೋಗಬೇಕು ಅಂದರೆ ನೀವು 11 ಗೋಡೆಗಳನ್ನ ದಾಟಬೇಕು..  ಅಲ್ಲಿಂದ ಸ್ವಲ್ಪ ಮುಂದೆ ಹೋದರೆ ಇನ್ನೊಂದು surprise  ಕಾದಿತ್ತು ಅದೇನು ಗೊತ್ತಾ? 
ಅದೇನಂದರೆ   ಅದೊಂದು ಇಳಿಜಾರಿನ ಪ್ರದೇಶ ಅಲ್ಲಿ ಹತ್ತಬೇಕು ಅಂದರೆ ಅಲ್ಲಿ ಮೆಟ್ಟಿಲುಗಳಿಲ್ಲ ಮತ್ತು support  ಹಿಡಿಯೋದಕ್ಕೆ ಏನೂ ಇಲ್ಲ... ಅಪ್ಪಿ ತಪ್ಪಿ ಕಾಲು ಜಾರಿದರೆ or balance  ತಪ್ಪಿದರೆ ನೇರವಾಗಿ ಬೇರೆ ಲೋಕಕ್ಕೆ ಪಯಣ......!!!!!
ಈ ಬೆಟ್ಟ ಹತ್ತಲು ಹರಿಶನ್ನ ಸ್ಮರಿಸಲೇ ಬೇಕು ಯಾಕೆ ಗೊತ್ತ.. ಅವನು ಹೊಸ ಟ್ರೆಕ್ಕಿಂಗ್ ವಿಧಾನವನ್ನ ಕಂಡುಹಿಡಿದಿದ್ದ .. ಅದೇನಂದರೆ ಆಮೆ ಥರ ಹೊಟ್ಟೆ ಸವೆದುಕೊಂಡು ಬೆಟ್ಟ ಹತ್ತೋದು...:) 

Balance ಮಿಸ್ ಆದ್ರೆ ನೇರವಾಗಿ ಬೇರೆ ಲೋಕಕ್ಕೆ ಪಯಣ

Balance ಮಿಸ್ ಆದ್ರೆ ನೇರವಾಗಿ ಬೇರೆ ಲೋಕಕ್ಕೆ ಪಯಣ

ಅಂತು ಇಂತೂ ಹರಸಾಹಸ ಮಾಡಿ ಹನ್ನೊಂದು ಗೋಡೆಗಳನ್ನ ಆಕ್ರಮಣ ಮಾಡಿ ನಮ್ಮ ಹತೋಟಿಗೆ ತಗೆದುಕೊಂಡಿದ್ವಿ...:)
ಕೊನೆಗೆ ಬೆಟ್ಟ ಹತ್ತಿರೋ ಖುಷಿಯಲ್ಲಿ ಎಲ್ಲರೂ ಕುಣಿದು ಕುಪ್ಪಳಿಸಿ ಜಯದ ಜಯಕಾರಗಳನ್ನು ಹೇಳಿದರು.. ಆ ಗೆಲುವಿನ ಸಂತೋಷಕ್ಕೆ ನಮಗೆ ಆರತಿ ಮಾಡೋದೊಂದು ಬಾಕಿ ಇತ್ತು ನೋಡ್ರಿ...

ಯಾಹೂ ಕೊನೆಗೂ ನಾವೇ ಗೆದ್ವಿ 


ಬೆಟ್ಟದ ಮೇಲೆ ಗೋಪಾಲಸ್ವಾಮಿ ಗುಡಿ ಇದೆ... ಆದರೆ ಅಲ್ಲಿ ಯಾರು ಕಾಳಜಿ ವಹಿಸದ್ದರಿಂದ ಆ ಗುಡಿ ಹಾಳುಬಿದ್ದಿದೆ ... ಅಲ್ಲೇ ಒಂದು ಕಲ್ಲುಮಂಟಪವಿದೆ  ಅಲ್ಲಿ ಕುಳಿತು  ನಿಂಬೆ ಹಣ್ಣಿನ ಅಳತೆಯಷ್ಟಿರೋ ಕಿತ್ತಳೆ ಹಣ್ಣುಗಳನ್ನ  ಮತ್ತು biscuits .. cakes  ತಿಂದ್ವಿ... 
ಅಲ್ಲೇ ಸ್ವಲ್ಪ ವಿಶ್ರಾಂತಿ ತಗೊಂಡು.. ಬೆಟ್ಟದ ಮೇಲೆ full  ಸುತ್ತಾಡಿ ..ಫೋಟೋಸ್ ಗೆ ಫೋಸ್ ಕೊಟ್ಟು.. 
ಸುಮಾರು ಮದ್ಯಾನ 12 ಕ್ಕೆ ಕೆಳಗೆ ಇಳಿಯೋದಕ್ಕೆ ಶುರುಮಾಡಿ 80 ನಿಮಿಷದಲ್ಲಿ ಕೆಳಗೆ ಬಂದ್ವಿ...

ಹಂಗೆ ಒಂದು ಪೋಸ್
 ಅಲ್ಲಿಂದ ಹೊರಟು ಕೊರಟಗೆರೆ ಗೆ ಬಂದು ಒಂದು ಅಂಗಡಿಯಲ್ಲಿ ಸ್ವೀಟ್ ಲೈಮ್ ಸೋಡಾ, ಮಸಾಲಾ ಸೋಡಾ, ಕೂಲ್ಡ್ರಿಂಕ್ಸ್  ಕುಡಿದು ಸ್ವಲ್ಪ ವಿಶ್ರಮಿಸಿ ಬೆಂಗಳೂರಿಗೆ ಸುಮಾರು ಸಾಯಂಕಾಲ 4ಕ್ಕೆ ಬಂದು ತಲುಪಿದ್ವಿ..  
ಆಯಾಸವಾದರೂ ಈ ಟ್ರೆಕ್ಕಿಂಗ್  ಯಶಶ್ವಿಯಾದ್ದರಿಂದ ಎಲ್ಲರ ಮುಖದಲ್ಲಿ ಆ ಆಯಾಸ ಕಾಣಿಸಲಿಲ್ಲ... 
ಒಬ್ಬರಿಗೊಬ್ಬರು ಕೃತಜ್ಞತೆಗಳನ್ನು ಹೇಳಿ.. ತಮ್ಮ ತಮ್ಮ ಮನೆಗೆ ಮರಳಿದರು... 

ಕೃತಜ್ಞತೆಗಳು:-
ಚೈತನ್ಯಕುಮಾರ್  ಎ   ( ಟ್ರೆಕ್ಕಿಂಗ್ ವ್ಯವಸ್ತಾಪಕರು )
ಮತ್ತು ಟ್ರೆಕ್ಕಿಂಗಲ್ಲಿ  ಬಾಗವಹಿಸಿದ ಎಲ್ಲ  ಗೆಳೆಯರಾದ (ಸಹ ಚಾರಣಿಗರಾದ  ಚೈತನ್ಯಕುಮಾರ್, ಹರೀಶ್, ಸಂತೋಷ್, ಆಧಾರ್, ಗೌತಮ್ ಮತ್ತು ಚನ್ನ ... 



....ಸಲಹೆ ಸೂಚನೆಗಳನ್ನು  ಹೃತ್ಪೂರ್ವಕವಾಗಿ ಸ್ವೀಕರಿಸುತ್ತೇನೆ .....